ಮಕ್ಕಳ ಕವಿತೆ

ಅರುಣಾ ರಾವ್

ಕಾಗೆ

ಕಾಕಾ ಕಾಗೆ
ಕಪ್ಪನೆ ಕಾಗೆ
ಹಾರುವೆ ಏಕೆ
ಅಲ್ಲಿಲ್ಲಿ??

ಅಗುಳನು ಕಂಡು
ಹರುಷದಿ ಬಂದು
ಕರೆಯುವೆ ಬಳಗವ
ನೀನಿಲ್ಲಿ|

ಹಂಚುವ ಬುದ್ಧಿ
ತೋರಿತು ಸಿದ್ಧಿ
ಮಾನವ ಕಲಿ ನೀ
ಪಾಠವನು|

ಕಾಗೆಗಿಂತಲೂ
ಕನಿಷ್ಟ ನೀನು
ತಿಳಿದುಕೊ ನಿನ್ನಯ
ನಿಜವನ್ನು

ಹಂಚಿ ತಿಂದರೆ
ಸಾರ್ಥಕ ಬದುಕು
ನೀತಿ ಪಾಠವನು
ಕಲೀಬೇಕು|

ಕೂಡಿ ಬಾಳುತಾ
ಹಂಚಿ ಬದುಕುತಾ
ಸಂತಸದಿ ದಿನ
ಕಳೀಬೇಕು


ಅರುಣಾ ರಾವ್

Leave a Reply

Back To Top